ಒಂದು ಒಳ್ಳೆಯ ಪೊರಕೆ !

ಪ್ರಿಯ ಸಖಿ,
ಇಂದು
ನಮ್ಮ ದೇಶದ
ಬಹು ಮುಖ್ಯ ಅರಕೆ
ಒಂದು
ಒಳ್ಳೆಯ ಪೊರಕೆ !
ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು. ಈ ಪುಟ್ಟ ಪದ್ಯದಲ್ಲಿ ಎಷ್ಟೊಂದು ಅರ್ಥ ತುಂಬಿದೆಯೆಲ್ಲವೇ ಸಖೀ?

ಇಂದು ದೇಶದ ತುಂಬೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ, ಜಾತೀಯತೆ, ಸ್ವಾರ್ಥ ರಾಜಕಾರಣ, ಅನಕ್ಷರತೆ, ಮೌಢ್ಯ, ಪರಸ್ಪರ ಕಚ್ಚಾಟ…. ಇತ್ಯಾದಿ ಏನೆಲ್ಲಾ ಕಸಗಳು ತುಂಬಿ ಹೋಗಿವೆ. ಇವಗಳ ಜೊತೆಗಿದ್ದು ನಾವೂ ಇದರಲ್ಲಿ ಒಂದಾಗಿ ಹೋಗಿದ್ದೇವೆ. ದೇಶದ ಪರಿಸ್ಥಿತಿಯ ಬಗೆಗೆ ಆಗೀಗ ಗೊಣಗುಟ್ಟಿಕೊಂಡರೂ ‘ನಮ್ಮೊಬ್ಬರಿಂದ ಏನು ಸಾಧ್ಯ’ ಎಂದು ಸಮಜಾಯಿಷಿ ಮಾಡಿಕೊಂಡು ಬಿಡುತ್ತೇವೆ. ‘ದೇಶದ ಕುರಿತು ನನಗೇನು’ ಎಂದು ಜನ ನಿರ್ಲಕ್ಷ ತೋರಲಾರಂಭಿಸಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುತ್ತಾನೆ ರೂಸೋ.

ಈ ಕಸವನ್ನು ಗುಡಿಸಲು ಎಲ್ಲಿಂದಲಾದರೂ ಯಾರಾದರೂ ಪ್ರಾರಂಭಿಸಲೇ ಬೇಕಲ್ಲವೇ? ಅದಕ್ಕೆ ಬೇಕಿರುವುದು ಒಂದು ಒಳ್ಳೆಯ ಪೊರಕೆ ಎಂದಿದ್ದಾರೆ ಕವಿ. ಹಾಗಾದರೆ ಆ ಪೊರಕೆ ಯಾವುದು? ನನಗನ್ನಿಸುವುದು ಬಹುಶಃ ‘ಜಾಗೃತಿ’ ಎಂಬ ಪೊರಕೆಯೇ ಇದಕ್ಕೆ ಉತ್ತರ. ಜಾಗೃತಿ ಎಂಬ ಪೊರಕೆಗೆ ಶಿಕ್ಷಣ, ದೇಶಪ್ರೇಮ, ವೈಚಾರಿಕ ಪ್ರಜ್ಞೆ ನಿಸ್ವಾರ್ಥತೆ, ವಿವೇಚನೆ, ನಂಬಿಕೆ, ಶ್ರದ್ಧೆ, ಆತ್ಮಸ್ಥೈರ್ಯ….. ಇತ್ಯಾದಿ ಪೊರಕೆ ಕಡ್ಡಿಗಳೇ ಬಲ! ಇಂತಹ ನೂರಾರು ಕಡ್ಡಿಗಳು ಸೇರಿ ತಾನೆ ‘ಜಾಗೃತಿ’ ಎಂಬ ಒಂದು ಪೊರಕೆಯಾಗುವುದು?

ನಿಜಕ್ಕೂ ನಾವು ಈಗ ಮಾಡಬೇಕಿರುವುದು ಇಂತಹ ಪೊರಕೆ ಕಡ್ಡಿಗಳ ಸೃಷ್ಟಿ. ಇದು ಸುಲಭವೂ ಅಲ್ಲ. ಅಸಾಧ್ಯವೂ ಅಲ್ಲ! ಮಾನವ ಮನಸ್ಸು ಮಾಡಿದರೆ ಯಾವುದು ತಾನೇ ಸಾಧ್ಯವಿಲ್ಲ? ಎಲ್ಲಕ್ಕೂ ಮುಖ್ಯವಾಗಿ ಮನಸ್ಸು ಮಾಡಬೇಕಷ್ಟೇ! ದಿಟ್ಟ ಮನಸ್ಸಿನಿಂದ ಪುಟ್ಟ ಹೆಜ್ಜೆ ಇಡುತ್ತಲೇ ಇಂತಹ ಪೊರಕೆ ಕಡ್ಡಿಗಳನ್ನು ಸೃಷ್ಟಿಸಿದರೆ ಪೊರಕೆ ತಾನಾಗಿ ಎಲ್ಲ ಕಡೆಯಿಂದಲೂ ಏಳುತ್ತದೆ. ತಾನೇ ಕಸಗುಡಿಸುತ್ತದೆ. ಸ್ವಚ್ಚ ಮಾಡುತ್ತದೆ. ಇಂತಹ ಒಂದು ಒಳ್ಳೆಯ ಪೊರಕೆಗಾಗಿ ಒಂದು ಪೊರಕೆ ಕಡ್ಡಿಯನ್ನಾದರೂ ಸೃಷ್ಟಿಸುವುವಕ್ಕೆ ನಾವು ಪ್ರಯತ್ನಿಸಿದರೆ ಅದಕ್ಕಿಂತಾ ಒಳ್ಳೆಯ ಕೆಲಸ ಇನ್ನಾವುದಿದೆ? ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಂಗೆ ಮರೀದೆ ಕೊಡೆ
Next post ನಿನ್ನಲಂಕಾರ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys